Monday, 16 January 2017

ವಿಚಾರ


ಹಣ್ಣುತುಂಬಿದ ಮರಗಳು ಬಾಗುತ್ತವೆ, ಬೋಳು ಮರ ನೆಟ್ಟಗೆ ನಿಂತಿರುತ್ತದೆ,

ನೀರು ತುಂಬಿದ ಕಾರ್ಮೋಡಗಳು ನೆಲಕ್ಕೆ ಬರುತ್ತವೆ,ಬಿಳಿ ಮೋಡಗಳು ಹಾರಿಹೋಗುತ್ತವೆ,

ಹಾಲು ತುಂಬಿದ ಹಸು ಸಾಧುವಾಗಿರುತ್ತದೆ, ಹಾಲಿಲ್ಲದ ದನ ಪುಂಡುತನ ಮಾಡುತ್ತದೆ,

ಸಿಹಿ ನೀರು ತುಂಬಿದ ಕೊಳ ಮೌನವಾಗಿರುತ್ತದೆ, ಉಪ್ಪು ನೀರಿನ ಸಮುದ್ರ ಗರ್ಜಿಸುತ್ತದೆ,

ಅಜ್ಞಾನಿ ಹರಟೆ ಹೊಡೆಯುತ್ತಾನೆ, ಜ್ಞಾನಿ ಮೌನವಾಗಿರುತ್ತಾನೆ.

ಶವ ಮುಟ್ಟಿದರೆ ಸ್ನಾನ ಮಾಡುತ್ತೀಯ,ಆದರೆ ಮೂಕ ಪ್ರಾಣಿಯ ಹೊಡೆದು ತಿನ್ನುತ್ತೀಯ|

ಈ ಮಂದಿರ ಮಸೀದಿಗಳು ಎಂತಹ ಅದ್ಭುತ ಸ್ಥಳಗಳು,ಅಲ್ಲಿ ಹೊರಗೆ ಬಡವ ಹಾಗೂ ಒಳಗೆ ಶ್ರೀಮಂತ ಭಿಕ್ಷೆ ಬೇಡುತ್ತಾನೆ.

 ಯಲ್ಲಪ್ಪ ನಂದಿ.