Wednesday, 11 January 2017

ಆರೋಗ್ಯದ ಓಳಿತಿಗಾಗಿ


ಬಿಕ್ಕಳಿಕೆ ಬರುವುದೇ  ಹುರುಳಿ ಕಷಾಯ ಸೇವಿಸಿರಿ.

ಕಫ ಬರುವುದೇ  ಶುಂಠಿ ಕಷಾಯ ಸೇವಿಸಿರಿ.

ಹೊಟ್ಟೆಯಲ್ಲಿ ಹರಳಾದರೇ ಬಾಳೆದಿಂದಿನ ಪಲ್ಯ ಸೇವಿಸಿರಿ.

ತೊದಲು ನುಡಿಯುತ್ತಿದ್ದರೆ  ಮೃತ್ಯುಂಜಯ ಮಂತ್ರ ಹೇಳಿರಿ.

ಬಿಳಿ ಕೂದಲೇ  ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.

ಮರೆವು ಬರುವುದೇ  ನಿತ್ಯ ಸೇವಿಸಿ ಜೇನು.

ಕೋಪ ಬರುವುದೇ  ಕಾಳು ಮೆಣಸು ಸೇವಿಸಿ.

ಮೂಲವ್ಯಾಧಿಯೇ  ನಿತ್ಯ ಸೇವಿಸಿ ಎಳ್ಳು.

ಮುಪ್ಪು ಬೇಡವೇ ಗರಿಕೆ ರಸ ಸೇವಿಸಿ.

ನಿಶಕ್ತಿಯೇ  ದೇಶಿ ಆಕಳ ಹಾಲು ಸೇವಿಸಿ.

ಇರುಳುಗಣ್ಣು ಇದೆಯೇ  ತುಲಸಿ ರಸ ಕಣ್ಣಿಗೆ ಹಾಕಿ.

ಕುಳ್ಳಗಿರುವಿರೇ ನಿತ್ಯ ಸೇವಿಸಿ ನಿಂಬೆ ಹಣ್ಣು.

ತೆಳ್ಳಗಿರುವಿರೆ  ನಿತ್ಯ ಸೇವಿಸಿ ಸೀತಾ ಫಲ.

ತೆಳ್ಳಗಾಗಬೇಕೇ  ನಿತ್ಯ ಸೇವಿಸಿ ಬಿಸಿ ನೀರು.

ಹಸಿವಿಲ್ಲವೇ  ನಿತ್ಯ ಸೇವಿಸಿ ಓಂ ಕಾಳು.

ತುಂಬಾ ಹಸಿವೇ  ಸೇವಿಸಿ ಹಸಿ ಶೇಂಗಾ.

ಬಾಯಾರಿಕೆಯೇ  ಸೇವಿಸಿ ತುಳಸಿ.

ಬಾಯಾರಿಕೆ ಇಲ್ಲವೇ  ಸೇವಿಸಿ ಬೆಲ್ಲ.

ಸಕ್ಕರೆ ಕಾಯಿಲೆಯೇ  ಬಿಡಿ ಸಕ್ಕರೆ ಸೇವಿಸಿ ರಾಗಿ.

ಸಾರಾಯಿ ದಾಸರೇ  ಗೋಸೇವೆ ಮಾಡಿ ಗೋಮೂತ್ರ ಸೇವಿಸಿ.

ರಕ್ತ ಹೀನತೆಯೇ  ನಿತ್ಯ ಸೇವಿಸಿ ಪಾಲಕ್ ಸೊಪ್ಪು.

ತಲೆ ಸುತ್ತುವುದೇ  ಬೆಳ್ಳುಳ್ಳಿ ಕಷಾಯ ಸೇವಿಸಿ.

ದೃಷ್ಟಿ ದೋಷವೇ  ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ ನಿತ್ಯ ಸೇವಿಸಿ ಕಿರುಕಸಾಲಿ.

ಬಂಜೆತನವೇ  ಔದುಂಬರ ಚಕ್ಕೆ ಕಷಾಯ ಸೇವಿಸಿ.

ಭಯವೇ  ಗೋಮೂತ್ರ ಸೇವಿಸಿ.

ಸ್ವಪ್ನ ದೋಷವೇ ತುಳಸಿ ಕಷಾಯ ಸೇವಿಸಿ.

ಅಲರ್ಜಿ ಇದೆಯೇ  ಅಮೃತ ಬಳ್ಳಿ ಕಷಾಯ ಸೇವಿಸಿ.

ಹೃದಯ ದೌರ್ಬಲವೇ ಸೋರೆಕಾಯಿ ರಸ ಸೇವಿಸಿ.

ರಕ್ತ ದೋಷವೇ  ಕೇಸರಿ ಹಾಲು ಸೇವಿಸಿ.

ದುರ್ಗಂಧವೇ  ಹೆಸರು ಹಿಟ್ಟು ಸ್ನಾನ ಮಾಡಿ.

ಕೋಳಿ ಜ್ವರಕ್ಕೆ  ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.

ಕಾಲಲ್ಲಿ ಆಣಿ ಇದೆಯೇ  ಉತ್ತರಾಣಿ ಸೊಪ್ಪು ಕಟ್ಟಿರಿ.

ಮೊಣಕಾಲು ನೋವು  ನಿತ್ಯ ಮಾಡಿ ವಜ್ರಾಸನ.

ಸಂಕಟ ಆಗುವುದೇ  ಎಳನೀರು ಸೇವಿಸಿ.

ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ  ನಿತ್ಯ ಕೊಡಿ ಜೇನು.

ಜಲ ಶುದ್ಧಿ : ಮಾಡಬೇಕೇ  ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ತುಳಸಿ ಎಲೆ ಹಾಕಿರಿ.

ವಾಂತಿಯಾಗುವುದೇ  ಎಳನೀರು-ಜೇನು ಸೇವಿಸಿ.

ಭೇದಿ ತುಂಬಾ ಆಗುವುದೇ  ಅನ್ನ ಮಜ್ಜಿಗೆ ಊಟ ಮಾಡಿ.

ಜಿಗುಪ್ಸೆ ಆಗಿದೆಯೇ  ಪ್ರಾಣಾಯಾಮ ಮಾಡಿ.

ಹಲ್ಲು ಸಡಿಲವೇ ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.

ಕಾಮಾಲೆ ರೋಗವೇ  ನಿತ್ಯ ಮೊಸರು ಸೇವಿಸಿ.

ಉಗುರು ಸುತ್ತು ಇದೆಯೇ  ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.

ಎದೆ ಹಾಲಿನ ಕೊರತೆಯೇ ನಿತ್ಯ ಸೇವಿಸಿ ಎಳ್ಳು.

ಎಲುಬುಗಳ ನೋವೇ  ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.


          ಯಲ್ಲಪ್ಪ ನಂದಿ