Thursday, 31 May 2018

ಮೇಜರ್ ಮಡಿದನಂತರ, ಮಡದಿ ಕ್ಯಾಪ್ಟನ್ ಆದ ಒಂದು ಯಶೋಗಾಥೆ.

ಅವಳಿಗೆ ಮದುವೆ ಆದಾಗ ಕೇವಲ ಹತ್ತೊಂಬತ್ತು ವರ್ಷ ವಯಸ್ಸುಎಲ್ಲ ಹೆಣ್ಣು ಮಕ್ಕಳಂತೆ ಹಲವಾರು ಕನಸುಗಳನ್ನು ಹೊತ್ತು ಗಂಡನ ಮನೆಗೆ ಬಂದಿದ್ದಳು ಶಾಲಿನಿಗಂಡ ಮೇಜರ್ ಅವಿನಾಶ್ಭಾರತೀಯ ಸೈನ್ಯದಲ್ಲಿ ಆಫಿಸರ್ಮದುವೆ ಆದನಂತರದಲ್ಲಿ ಓದುವುದನ್ನು ನಿಲ್ಲಿಸಲಿಲ್ಲಕಾಲೇಜಿಗೆ ಹೋಗುವುದನ್ನು ಮುಂದುವರಿಸಿದಳು. 1999 ರಲ್ಲಿ ದಂಪತಿಗಳಿಗೆ ಮಗುವಾಯಿತುತಾಯಿಯಾಗಿಮಡದಿಯಾಗಿಕಾಲೇಜಿನಲ್ಲಿ ನೆಚ್ಚಿನ ವಿದ್ಯಾರ್ಥಿಯಾಗಿ ಬದುಕಿನ ಅತ್ಯಂತ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದವಳು ಶಾಲಿನಿಮೇಜರ್ ಅವಿನಾಶ್ ಅವರನ್ನು ಕಾಶ್ಮೀರದ ಗಡಿಪ್ರದೇಶದಕ್ಕೆ ಪೋಸ್ಟಿಂಗ್ ಮಾಡಲಾಗಿತ್ತುಆವಾಗ ಇವತ್ತಿನ ಹಾಗೆ ಎಲ್ಲರ ಹತ್ತಿರವೂ ಮೊಬೈಲ್ ಇರುತ್ತಿರಲಿಲ್ಲಮನೆಗೊಂದು ದೂರವಾಣಿಯ ಕಾಲವೂ ಅದು ಅಲ್ಲಆಗಾಗ ಮೇಜರ್ ಪೋನ್ ಮಾಡುತ್ತಿದ್ದರುಅರ್ಥವಾಗದ ಮಗುವಿನ ಮುದ್ದು ಮಾತನ್ನು ಕೇಳಿ ಆನಂದಿಸುತ್ತಿದ್ದರುದೂರದ ಟ್ರಂಕ್ ಕಾಲ್ಸರಿಯಾದ ಇನ್ಸ್ಟ್ರುಮೆಂಟ್ಸ್ ಇಲ್ಲಕನೆಕ್ಷನ್ ಸರಿ ಇಲ್ಲಸರಿಯಾಗಿ ಮಾತನಾಡಿದ್ದು ಕೇಳುವುದಿಲ್ಲ ಆದರೂ ,ಗಂಡ ಹೆಂಡತಿ ಎಷ್ಟೋ ದಿನಕ್ಕೊಮ್ಮೆ ಆಡುವ ಮಾತುಅದು ಯುದ್ಧವೊಂದನ್ನು ಜಯಿಸಿದ ಖುಷಿಯನ್ನು ಕೊಡುತ್ತಿತ್ತುಆದರೆ ಇದೇ ಕರೆ ಒಂದು ಬೆಳಗಿನ ಜಾವದಲ್ಲಿ ಸಿಡಿಲಾಗಿ ಬಂದು ಬದುಕಿನಲ್ಲಿ ಬಡಿಯಿತುಅಂದು ಮುಂಜಾನೆ ಕಾಶ್ಮೀರದ ಸೈನ್ಯದ ಕಚೇರಿಯಿಂದ ಕರೆ ಬಂದಿತ್ತು. “ಮೇಜರ್ ಅವಿನಾಶ್ಭಯೋತ್ಪಾದಕರ ಜೊತೆ ಹೋರಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ”, ಎಂಬ ಸುದ್ದಿಯನ್ನು  ಕರೆ ತಂದಿತ್ತುಚೆಂದದ ಒಂದು ಪುಟ್ಟ ಸಂಸಾರದ ಮೇಲೆ ಅಣು ಬಾಂಬ್ ಒಂದು ಬಿದ್ದಂತಾಗಿತ್ತುಶಾಲಿನಿಗೆ ಏನೂ ತೋರಲಿಲ್ಲದೇಹವು ಸಂವೇದನೆಯನ್ನು ಕಳೆದುಕೊಂಡಿತುಎರಡು ಗಂಟೆಯ ನಂತರ ಮತ್ತೊಂದು ಕರೆಅದರಲ್ಲಿ ಮೇಜರ್ ಅವಿನಾಶ್ ಶಹೀದ್ ಆದರು ಎಂದು ಹೇಳಿದರುಅದನ್ನು ಕೇಳಿ ಶಾಲಿನಿ ನಿಂತಲ್ಲೇ ಕುಸಿದಳುಅವಳ ಪಾಲಿಗೆ ಕಾಲವೇ ನಿಂತು ಹೋಯಿತು. 28 ಸೆಪ್ಟೆಂಬರ್ 2001, ಭಾರತೀಯ ಯೋಧನೊಬ್ಬ ತಾನು ಶಹೀದನಾಗುವ ಮೊದಲು ವೀರಾವೇಶದಲ್ಲಿ ಹೋರಾಡಿ ನಾಲ್ಕು ಭಯೋತ್ಪಾದಕರನ್ನು ಸದೆಬಡಿದಿದ್ದಹೋರಾಟದಲ್ಲಿ ಬುಲೆಟ್ ತನ್ನ ದೇಹದೊಳಕ್ಕೆ ನುಗ್ಗಿದ್ದು ತಿಳಿದಿರಲಿಕ್ಕಿಲ್ಲಆರ್ಮಿಯ ಆಸ್ಪತ್ರೆಗೆ ತಂದಾಗ ದೇಹದಲ್ಲಿ ಉಸಿರು ಇರಲಿಲ್ಲಕೀರ್ತಿ ಚಕ್ರ ಮೇಜರ್ ಅವಿನಾಶ್ ಸಿಂಗ್ ಬದುರಿಯಾ ಅವರಿಗೆ ಆಗ ಕೇವಲ 29 ವರ್ಷ ವಯಸ್ಸುಅವರನ್ನೇ ನಂಬಿದ್ದ ಇಪ್ಪತ್ತ ಮೂರು ವರ್ಷದ ತರುಣಿ ವಿಧವೆ ಆಗಿದ್ದಳುಜಗತ್ತನ್ನೇ ಅರಿಯದ ಎರಡು ವರ್ಷದ ಮುದ್ದು ಬಾಲೆ ಧ್ರುವ ಅಪ್ಪನನ್ನು ಕಳೆದುಕೊಂಡಿದ್ದ!
ಶಾಲಿನಿಯ ಬದುಕಿನ ಜಟಕಾ ಬಂಡಿ ಬೆಳಕು ಕಾಣದ ಸುರಂಗದೊಳಗೆ ನಿಂತು ಹೋಗಿತ್ತುದಿನವೆಲ್ಲ ಕತ್ತಲಲ್ಲಿ ಮುಳುಗಿತ್ತುಸಂತೈಸಲು ಅದೆಷ್ಟು ಜನ ಬಂದರೋಸಮಾಧಾನಕರ ಮಾತುಗಳು ಅದೆಷ್ಟು ಉದುರಿದವೋ ಯಾವುದರ ಅರಿವೂ ಶಾಲಿನಿಗೆ ಆಗುತ್ತಿರಲಿಲ್ಲತೊಡೆಯ ಮೇಲೆ ಆಡುತ್ತಿರುವ ಪುಟ್ಟ ಮಗುವಿಗೆ ಏನೂ ಅರ್ಥ ಆಗುತ್ತಿರಲಿಲ್ಲಎಲ್ಲರೊಡನೆ ಕಿಲ ಕಿಲ ಎಂದು ನಗುತ್ತಾ ಅಮ್ಮನ ಕೈ ತಪ್ಪಿಸಿಕೊಂಡು ಹೋಗಿ ಅಂಗಳದಲ್ಲಿ ಆಡುತ್ತಿರುತ್ತಿತ್ತುಒಮ್ಮೆ ಶಾಲಿನಿ ‘ ಜೀವನವೇ ಬೇಡಇಲ್ಲಿಗೇ ಮುಗಿಸಿಕೊಂಡು ಬಿಡೋಣ’ ಎನಿಸಿದ್ದಳಂತೆಆದರೆ ಅವಳಿಗೆ ಎರಡು ವರ್ಷದ ಕಂದಮ್ಮನನ್ನು ನೋಡಿ ಹಾಗೆ ಮಾಡಲು ಮನಸ್ಸು ಬರಲಿಲ್ಲಹೆತ್ತ ಮಗುವಿನ ಭವಿಷ್ಯದಕ್ಕಾದರೂ ಬದುಕಬೇಕು ಎಂದು ನಿರ್ಧರಿಸಿದಳು ನಿರ್ಧಾರದ ಜೊತೆಗೆ ಎಲ್ಲರಿಗೂ ಆಶ್ಚರ್ಯ ಮೂಡಿಸಿದ ಇನ್ನೊಂದು ನಿರ್ಧಾರ ಅಂದರೆ ಅವಳು ‘ತಾನು ಸೈನ್ಯವನ್ನು ಸೇರುತ್ತೇನೆ’ ಎಂದಿದ್ದುಸೈನ್ಯ ಸೇರುವುದು ಅಷ್ಟು ಸುಲಭವಲ್ಲಅದೂ ಮಹಿಳೆಗೆದೇಹದಲ್ಲಿ ಕೋಮಲೆಯಾಗಿದ್ದವಳುಅಪ್ಪ ಅಮ್ಮನ ಮುದ್ದಿನ ಮಗಳು ಬೇರೆಏನನ್ನೂ ಲೆಕ್ಕಿಸದೆ ಆಗತಾನೇ ಪ್ರವೇಶ ಪಡೆದ ಸ್ನಾತಕೋತ್ತರ ಶಿಕ್ಷಣವನ್ನು ಅಲ್ಲಿಗೆ ನಿಲ್ಲಿಸಿ ಸರ್ವಿಸ್ ಸಿಲೆಕ್ಷನ್ ಬೋರ್ಡ್ ಪರೀಕ್ಷೆಗೆ ತಯಾರಿ ಶುರು ಮಾಡಿಯೇ ಬಿಟ್ಟಳುಸೈನ್ಯ ಸೇರುವುದುಅದಕ್ಕೆ ತರಬೇತಿ ಪಡೆಯುವುದು ಅಂದರೆ ಮಗುವನ್ನು ಬಿಟ್ಟು ಎಲ್ಲೆಲ್ಲೋ ಅಡ್ಡಾಡಬೇಕುಹಗಲು ರಾತ್ರಿ ಎನ್ನದೆ ಸೇವೆ ಮಾಡಬೇಕುಆದರೇನಂತೆಅದಕ್ಕೆ ಮಾನಸಿಕವಾಗಿ ಸಿದ್ಧಳಾದಳು ಶಾಲಿನಿಮಗು ಧ್ರುವ ಬದುಕಿನ ದೌರ್ಬಲ್ಯ ಆಗಬಾರದುಬದಲಾಗಿ ಅವನೇ ಬದುಕಿಗೆ ಶಕ್ತಿ ತುಂಬಬೇಕು ಎಂದು ಬಯಸಿದಳುತಕ್ಷಣವೇ ಎಸ್.ಎಸ್.ಬಿ ಪರೀಕ್ಷೆಗೆ ಹಗಲಿರುಳು ತಯಾರಿ ನಡೆಸಿದಳುಗಂಡ ತೀರಿಕೊಂಡ ಮೂರು ತಿಂಗಳಾಗಿತ್ತು ಅಷ್ಟೇ ಅಲಹಾಬಾದ್ ಕೇಂದ್ರದಲ್ಲಿ ಒಂದು ವಾರ ನಡೆಯುವ ಸರ್ವಿಸ್ ಸಿಲೆಕ್ಷನ್ ಬೋರ್ಡ್ ಸಂದರ್ಶನಕ್ಕೆ ಕರೆ ಬಂದುಬಿಟ್ಟಿತುಸಂದರ್ಶನದ ಸಮಯದಲ್ಲಿ ಮನೆಯವರು ಯಾರೂ ಒಳಕ್ಕೆ ಬರುವ ಹಾಗಿಲ್ಲಹಾಗಿರುವಾಗ ಎಂದೂ ಅಮ್ಮನನ್ನು ಬಿಟ್ಟಿರದ ಎರಡು ವರ್ಷದ ಮಗುವನ್ನು ಎಲ್ಲಿ ಬಿಟ್ಟು ಬರುವುದು?
ಶಾಲಿನಿಯ ತಂದೆ ತಾಯಿ ಮಗುವನ್ನು ನೋಡಿಕೊಳ್ಳಲು ಬಂದರಂತೆಹಗಲೆಲ್ಲ ಅಲ್ಲೇ ಪಕ್ಕದಲ್ಲಿರುವ ಪಾರ್ಕಿನಲ್ಲಿ ಮಗುವನ್ನು ಆಡಿಸುತ್ತಿದ್ದರುಅಜ್ಜ ಹಾಗೂ ಅಜ್ಜಿ ಕೊಡುವ ಆಹಾರವನ್ನು ಪಾಪು ತಿನ್ನುತ್ತಲೇ ಇರಲಿಲ್ಲಅದು ಗೊತ್ತಾದ ಮೇಲೆ ಅನುಮತಿ ಪಡೆದುಕೊಂಡು ವಿರಾಮದ ಸಮಯದಲ್ಲಿ ಶಾಲಿನಿ ಬಂದು ಎದೆಹಾಲು ಕುಡಿಸಿ ಹೋಗುತ್ತಿದ್ದಳಂತೆಅಲ್ಲಿ ಬಂದವರಲ್ಲಿ ಯಾರಿಗೂ ಮದುವೆ ಆಗಿರಲಿಲ್ಲಎಲ್ಲರೂ ಶಾಲಿನಿಗೆ ಕಷ್ಟವನ್ನು ಎದುರಿಸಲು ಶಕ್ತಿ ಕೊಡುವಂತೆ ದೇವರನ್ನು ಬೇಡಿಕೊಳ್ಳುತ್ತಿದ್ದರು. SSB ಆಯ್ಕೆಯ ಪ್ರಕ್ರಿಯೆ ಅಷ್ಟು ಸುಲಭವಲ್ಲದೈಹಿಕ ಹಾಗೂ ಮಾನಸಿಕ ಒತ್ತಡ ತುಂಬಾ ಇರುತ್ತದೆಇದನ್ನೆಲ್ಲ ಎದುರಿಸಿ ನಿಂತಿದ್ದಳುಆದರೆ ರಾತ್ರಿ ತನ್ನ ಮಗ್ಗುಲಲ್ಲಿ ಇಲ್ಲದ ಮಗುವನ್ನು ನೆನೆಸಿಕೊಂಡು ಕಣ್ಣೀರು ಉಕ್ಕುತ್ತಿದ್ದವುಆದರೆ ಯಾವತ್ತು ಶಾಲಿನಿಗೆ ತನ್ನ ಆಯ್ಕೆ ಆದ ಸುದ್ದಿ ಕಿವಿಗೆ ಬಿತ್ತೋ ಆವಾಗ ಒಂದು ವಾರ ಹರಿದ ಕಣ್ಣೀರಿಗಿಂತ ಹೆಚ್ಚು ಆನಂದಬಾಷ್ಪವು ಕೂಡಿ ಬಂತು. “ಅಪ್ಪಅಮ್ಮಮಗು,ಹಾಗೂ ತಾನು ಎಲ್ಲರೂ ಸೇರಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅತ್ತೆವುಎನ್ನುತ್ತಾಳೆ ಶಾಲಿನಿಮೊದಲ ಹಂತದ ಆಯ್ಕೆ ಆದಮೇಲೆ ಎರಡನೇಯದು ಮೆಡಿಕಲ್ ಪರೀಕ್ಷೆ ಆಗಬೇಕಲ್ಲಅದಕ್ಕೆ ಇನ್ನೊಂದು ವಾರ ಅಲ್ಲೇ ಇರಬೇಕಿತ್ತುಇನ್ನೂ ಒಂದು ವಾರ ಅಪ್ಪ ಅಮ್ಮನನ್ನು ಪಾರ್ಕಿನ ಸುತ್ತ ಅಡ್ಡಾಡಿಸುವುದು ಬೇಡ ಎಂದು ಏನೂ ಅರಿಯದ ಮಗುವಿನ ಜೊತೆ ಮಾತನಾಡಿ ಅಜ್ಜ ಅಜ್ಜಿಯ ಜೊತೆ ಮನೆಗೆ ಹೋಗುವಂತೆ ಒಪ್ಪಿಸಿದಳುಮಗುವೂ ಒಪ್ಪಿತುಮಗುವಿಗೆ ಅಜ್ಜ ಅಜ್ಜಿಯ ಜೊತೆ ಅಮ್ಮನನ್ನು ಬಿಟ್ಟು ಹೋಗುವಾಗ ಎಷ್ಟು ಬೇಸರವಾಗಿರಬೇಡತಾಯಿಗೆ ಅದರ ದುಪ್ಪಟ್ಟುಕಣ್ಣೀರನ್ನು ಛಲದ ಅಣೆಕಟ್ಟು ಕಟ್ಟಿ ನಿಲ್ಲಿಸಿದಳುತಾಯಿ ಹಾಗೂ ಮಗು ಆತ್ಮಗಳ ಜೊತೆ ಸಂಪರ್ಕ‌ ಬೆಳೆಸಿಕೊಂಡರಂತೆಮಗು ಧ್ರುವನಿಗೆ ಒಂದು ವಾರ ತಾಯಿಯನ್ನು ಬಿಟ್ಟಿರಬೇಕಾದದ್ದು ಮುಂದಿನ ದಿನಗಳ ಒಂದು ಝಲಕ್ ಆಗಿತ್ತು ಅಷ್ಟೇ.
ಮಾರ್ಚ್ 2002ರಿಂದ ಶಾಲಿನಿಯ ಬದುಕೇ ಬದಲಾಯಿತುಚೈನೈನಲ್ಲಿಯ ಆಫೀಸರ್ಗಳ ತರಬೇತಿ ಕೇಂದ್ರದಲ್ಲಿ ಕ್ಯಾಪ್ಟನ್ ಆಗಿ ಭರ್ತಿಯಾದರುಮೈ ಮೇಲೆ ಸೀರೆಸಲ್ವಾರ್ ಹೋಗಿ ಆರ್ಮಿಯ ಸಮವಸ್ತ್ರ ಹಾಗೂ ಕಾಲಲ್ಲಿ ಮೆದುವಾದ ಸ್ಯಾಂಡಲ್ ಬದಲಾಗಿ ಮಿಲಿಟರಿ ಬೂಟ್ ಬಂದವುಶಾಲಿನಿ ಒಂದು ಸಂದರ್ಶನದಲ್ಲಿ “ಆಫಿಸರ್ ತರಬೇತಿ ಕಷ್ಟ ಅಷ್ಟೇಅಲ್ಲ ಕ್ರೂರಾಗಿತ್ತು ಕೂಡ”, ಎನ್ನುತ್ತಾಳೆಅದಕ್ಕೆ ಬೇಕಾದ ಶಕ್ತಿ ಪರಮಾತ್ಮ ಎಲ್ಲಿಂದ ಕರುಣಿಸಿದನೋಮೇಜರ್ ಒಬ್ಬರ ಹೆಂಡತಿಯಾಗಿ ಐಶಾರಾಮಿ ಜೀವನ ನಡೆಸಬೇಕಿದ್ದ ಶಾಲಿನಿ  ತರಹದ ಕಷ್ಟ ನಷ್ಟವನ್ನು ಕನಸಿನ ಯಾವ ಮೂಲೆಯಲ್ಲೂ ಕಂಡಿರಲಿಲ್ಲಅಕಾಡೆಮಿಯಲ್ಲಿ ಅನುಕಂಪ ಹಾಗಿರಲಿಉಳಿದವರಿಗಿಂತ ಹೆಚ್ಚು ಕಷ್ಟ ಇವರಿಗೆ ಕೊಡುತ್ತಿದ್ದರು ಯಾಕೆಂದರೆ ಇವರಲ್ಲಿರುವ  ‘ಹೆಂಡತಿಯನ್ನು ಸಾಯಿಸಿ ಸೈನ್ಯಾಧಿಕಾರಿಯಾಗಿ ಮಾಡಬೇಕಿತ್ತು. “ಅದೆಷ್ಟೋ ಬಾರಿ ನಾನು ನನ್ನ ದುರವ್ಯವಸ್ಥೆಯನ್ನು ಕಂಡು ಮರುಗಿದ್ದು ಇದೆ” ಎನ್ನುತ್ತಾರೆಯಾರಿಗಾದರೂ ಇದು ಸಹಜವೇಆದರೆ ಅಸಹಜ ಅಂದರೆ ಇದನ್ನೆಲ್ಲ ಗೆದ್ದು ಮುಂದೆ ಬರುವುದುಅಂದು 2002 ಸೆಪ್ಟೆಂಬರ್ ಏಳನೆಯ ತಾರೀಖುಆಫಿಸರ್ ಆಗಿ ತೇರ್ಗಡೆ ಆದವರಿಗೆ ಪದಕ ಪ್ರಧಾನ ಸಮಾರಂಭಮೇಜರ್ ಅವಿನಾಶ್ ಅವರು ಅಗಲಿ ಒಂದು ವರ್ಷ ತುಂಬಲು ಇನ್ನೂ ಏಳು ದಿನ ಬಾಕಿ ಇತ್ತುಕ್ಯಾಪ್ಟನ್ ಶಾಲಿನಿಯವರ ಭುಜಕ್ಕೆ ಪದಕ ಸಿಕ್ಕಿಸಲು ಅವಳ ಮೂರು ವರ್ಷದ ಮಗು ಬಂದಾಗ ಸಮಾರಂಭದಲ್ಲಿ ಸೇರಿದವರೆಲ್ಲರ ಕಣ್ಣಲ್ಲಿ ನೀರು ತುಂಬಿ ಬಂದಿತ್ತುಮೇಜರ್ ಮಡದಿಗಂಡ ಮಡಿದ ನಂತರ ಒಂದೇ ವರ್ಷದೊಳಗೆ ಸೈನ್ಯದಲ್ಲಿ ಕ್ಯಾಪ್ಟನ್ ಆಗಿ ಎಣಿಸಿದ್ದನ್ನು ಸಾಧಿಸಿ ತೋರಿಸಿದ್ದರುಮೇಜರ್ ಅವಿನಾಶ್ ಅವರಿಗೆ ಸಿಕ್ಕ ಕೀರ್ತಿ ಚಕ್ರ ಪದಕವನ್ನು ಸ್ವೀಕರಿಸಲು ಕ್ಯಾಪ್ಟನ್ ಶಾಲಿನಿ ಸಮವಸ್ತ್ರ ಧರಿಸಿಯೇ ಹೋಗಿದ್ದರುಎಂತಹ ಸಾಧನೆ ಅಲ್ಲವೇಅದಲ್ಲದೆ ಸರ್ವಿಸ್ ಸೇರಿದ ನಂತರ ಪುರುಷರ ಹಿಡಿತ ಇರುವ ಸೈನ್ಯದಲ್ಲಿ ಒಬ್ಬ ಮಹಿಳಾ ಅಧಿಕಾರಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರುಬದುಕಿನಲ್ಲಿ ಬಂದ ಕಷ್ಟವೆಲ್ಲವೂ ತಮ್ಮನ್ನು ಮತ್ತಷ್ಟು ಬಲಿಷ್ಠವಾಗಿಸಲು ಬರುತ್ತವೆ ಎಂಬುದನ್ನು ಅರಿತಿದ್ದಳು ಕ್ಯಾಪ್ಟನ್ ಶಾಲಿನಿ ಸಿಂಗ್.
ಆರು ವರ್ಷದ ಸೇವೆಯ ನಂತರ ಮಗನ ಭವಿಷ್ಯಕ್ಕಾಗಿ ನಿವೃತ್ತಿ ಪಡೆದರುಎಂಬಿಎ ಮುಗಿಸಿ ಖಾಸಗಿ ಕಂಪನಿಯೊಂದರಲ್ಲಿ ಸಿನಿಯರ್ ಮ್ಯಾನೇಜರ್ ಆಗಿ ದೆಹಲಿಯಲ್ಲಿ ಮಗನ ಜೊತೆ ಜೀವನ ಮಾಡುತ್ತಿದ್ದಾರೆಶಾಲಿನಿಯವರ ಮಗ ಧ್ರುವನಿಗೆ ಈಗ ಹದಿನಾರು ವರ್ಷಅವನ ಬದುಕಿನ ಯಶಸ್ಸೇ ಶಾಲಿನಿಯ ಕನಸುಕ್ಯಾಪ್ಟನ್ ಶಾಲಿನಿಯ ಸಾಧನೆಯ ಸಾಲು ಇಲ್ಲಿಗೇ ಮುಗಿಯಿತು ಎಂದುಕೊಳ್ಳಬೇಡಿ ವರ್ಷದ ಮಿಸೆಸ್ ಇಂಡಿಯಾ 2017 (ಕ್ಲಾಸಿಕ್ ವಿಭಾಗದಲ್ಲಿಪ್ರಶಸ್ತಿಯನ್ನು ಗೆದಿದ್ದು ಬೇರೆ ಯಾರೂ ಅಲ್ಲ ಇದೇ – ಕ್ಯಾಪ್ಟನ್ ಶಾಲಿನಿ ಸಿಂಗ್ಅವರ ಸಾಧನೆ ನೋಡಿದಾಗ ರೋಮಾಂಚನವಾಗುತ್ತದೆಒಬ್ಬ ಸೈನಿಕನ ಮಡದಿ ತನ್ನ ಜೀವನದಲ್ಲಿ ಯಾವ ರೀತಿಯ ನೋವನ್ನು ಅನುಭವಿಸಬೇಕಾಗುತ್ತದೆ ಎನ್ನುವುದಕ್ಕೆ ಕ್ಯಾಪ್ಟನ್ ಶಾಲಿನಿ ಒಂದು ಜೀವಂತ ಸಾಕ್ಷಿಆದರೆ ನೋಡಿಒಬ್ಬ ಮಹಿಳೆ ಏನನ್ನಾದರೂ ಮಾಡಬೇಕು ಅಂದು ಸಂಕಲ್ಪ ತೊಟ್ಟುಕೊಂಡರೆ ಎಷ್ಟು ಕಷ್ಟ ಎದುರಾದರೂ ಅದನ್ನು ಮೀರಿ ನಿಲ್ಲಬಲ್ಲಳುಅದನ್ನೂ ಶಾಲಿನಿ ಮಾಡಿ ತೋರಿಸಿದ್ದಾಳೆಕ್ಯಾಪ್ಟನ್ ಶಾಲಿನಿ ಅವರ ಧೈರ್ಯವನ್ನು ನಿಜವಾಗಿಯೂ ಮೆಚ್ಚಲೇ ಬೇಕುಯಾಕೆಂದರೆ ಎಲ್ಲಿ ತನ್ನ ಬದುಕನ್ನು ಕಳೆದುಕೊಂಡಳೋ‌ ಅಲ್ಲೆ ಹೋಗಿ ಹುಡುಕಿ ಮತ್ತೆ ಪಡೆದುಕೊಂಡಳುಸೈನ್ಯದಲ್ಲಿ ಸೇವೆ ಸಲ್ಲಿಸುವುದು ಸಾಮಾನ್ಯವಾಗಿ ಪುರುಷರಿಗೆ ಕೂಡ ಕಷ್ಟಅದರಲ್ಲೂ ಇನ್ನೊಬ್ಬರನ್ನು ಮದುವೆ ಆಗದೆ ಒಂಟಿ ಪಾಲಕಳಾಗಿ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಾ ಮಗನನ್ನು ಬೆಳೆಸಿತಮ್ಮ ಮೂವತ್ತೊಂಬತ್ತನೇಯ ವಯಸ್ಸಿನಲ್ಲಿ ಮಿಸೆಸ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದು ಮಹಾಸಾಧನೆಇವರ ಬದುಕು ಅದೆಷ್ಟೋ ಮಹಿಳೆಯರಿಗೆ ಪ್ರೇರಣೆ ಆಗಬಲ್ಲದುಬದುಕು ಒಂದೇ ಒಂದು ಅವಕಾಶವನ್ನು ಕೊಡುತ್ತದೆಅದನ್ನು ಉರುಳಿಸಬೇಕು ಇಲ್ಲವೇ ಉಳಿಸಿಬೆಳೆಸಿ ಜಯಿಸಬೇಕುಇದನ್ನೇ ಕ್ಯಾಪ್ಟನ್ ಶಾಲಿನಿಯ ಬದುಕು ಹಾಗೂ ಸಾಧನೆ ಹೇಳುತ್ತದೆ.