Friday, 28 October 2022

ಅಮ್ಮ

ಅಮ್ಮ ಎಂದರೆ ಪ್ರತ್ಯಕ್ಷ ದೇವತೆ,
ವಾತ್ಸಲ್ಯದ ಮೂರ್ತಿ,
ಬದುಕು ನೀಡಿದ ದೇವತೆ,
ನೀವೇ ನನ್ನ ಗುರು,
ನೀವೇ ನನ್ನ ಬದುಕಿನ ದಾರಿ,
ಅತ್ಯುತ್ತಮ ಗೆಳತಿ, ಅದ್ಭುತ ತಾಯಿ,
ಕೈ ಹಿಡಿದು ಮುನ್ನಡೆಸಿದ ಮಹಾಮಾತೆ,
ನನ್ನ ಬದುಕಿನ ಅತ್ಯಂತ ಮಹೋನ್ನತ ಮಹಿಳೆ ಮತ್ತು ಶಕ್ತಿ ನನ್ನಮ್ಮ,
ದೇವರು ನನಗೆ ಕರುಣಿಸಿದ ಬಹುದೊಡ್ಡ ಉಡುಗೊರೆ ನನ್ನಮ್ಮ.

ಇಂದಿಗೆ ನೀವು ನಮ್ಮನ್ನಗಲಿ ಒಂದು ವರ್ಷ ಪ್ರಥಮ ವರ್ಷದ ಪುಣ್ಯಸ್ಮರಣೆ ಅಮ್ಮ.
ನೀವು ಮತ್ತೆ ನನ್ನ ಮಗಳಾಗಿ ಹುಟ್ಟಿ ಬಾ ನನ್ನವ್ವ.



Tuesday, 2 August 2022

ಸಿದ್ದರಾಮೋತ್ಸವ 2022

 ಸಿದ್ದರಾಮೋತ್ಸವ

ಭಾರತಕ್ಕೂ ಅಮೃತ ಮಹೋತ್ಸವ

ಭಾಗ್ಯವಿದಾತನಿಗೂ ಅಮೃತ ಮಹೋತ್ಸವ

ಎಲ್ಲೆಲ್ಲಿಯೂ ಜನರ ಹರ್ಷದ ಉತ್ಸವ

 ಕರುನಾಡಿನ ನಿತ್ಯೋತ್ಸವ ಸಿದ್ದರಾಮೋತ್ಸವ


ಭಾಗ್ಯಗಳ ಹರಿಕಾರ

ಇವರೇ ಬಡವರ ದೇವರ

ಸಮ ಸಮಾಜದ ಕನಸುಗಾರ

ಮಾಡಿದರು ಅಹಿಂದ ಉದ್ದಾರ


ರಾಜಕೀಯದಲ್ಲಿ ಯಾರಿಲ್ಲ ಇವರ ತಕ್ಕ

 ವ್ಯವಹಾರದ ಲೆಕ್ಕ ಪತ್ರ ಚೊಕ್ಕ

ಇವರೆಂದರೆ ಎದುರಾಳಿಗೆ ನಡುಕ

ಮುರಿಯುವರು ಭ್ರಷ್ಟಾಚಾರಿಗಳ ಸೊಕ್ಕ

ಹೋರಾಡುವವರು ಸಮಾಜದ ನ್ಯಾಯಕ್ಕ


ಕರುನಾಡಿನ ಜನರ ಮನ ಗೆದ್ದ ಜನನಾಯಕರು

ಕೋಟಿಗೊಬ್ಬರು  ಇಂತಹ ಪುಣ್ಯಾತ್ಮರು

ಕೇವಲ ವ್ಯಕ್ತಿಯಲ್ಲ ಕರುನಾಡಿನ ಶಕ್ತಿ ಇವರು

ಮುಂದಿನ ಜನಾಂಗಕ್ಕೆ ದಾರಿದೀಪ ಇವರು


ಯಲ್ಲಪ್ಪ ನಂದಿ


Wednesday, 16 March 2022

ಅಕ್ಷರಗಳ ಅಪ್ಪುಗೆ - ನಮ್ಮ ಒಲವಿನ 'ಅಪ್ಪು'ಗೆ

ಅಕ್ಷರಗಳ ಅಪ್ಪುಗೆ - ನಮ್ಮ ಒಲವಿನ 'ಅಪ್ಪು'ಗೆ

'ಅಪ್ಪು'ಗೆ ನೀಡಿದಾಗ ಆತ್ಮೀಯ

'ಅಭಿ'ಮಾನಿಗಳ ಪಾಲಿಗೆ ಮಹನೀಯ

'ವೀರ ಕನ್ನಡಿಗ'ರೆದೆಯಲ್ಲಿ ವಿರಾಜಮಾನ

'ಮೌರ್ಯ' ಸಾಮ್ರಾಜ್ಯಕ್ಕಿಂತ ವಿಸ್ತೃತ ವಿಶಾಲ ಅಪ್ಪು 
ನೀವು ಗಳಿಸಿದ ಅಭಿಮಾನಿ ಸಾಮ್ರಾಜ್ಯ

'ಆಕಾಶ'ದೆತ್ತರ ಬೆಳೆದರೂ, ಭೂಮಿ ತೂಕದ ವ್ಯಕ್ತಿತ್ವ ನಿಮ್ಮದು

'ನಮ್ಮ ಬಸವ' ಶರಣರು ಬರೆದಂತೆ ಬದುಕಿದ ಜೀವ, ಕಳದೇ, ಕೊಲದೇ ಹುಸಿಯ ನುಡಿಯದೇ ಬದುಕಿದ ದೇಹ

'ಅಜಯ'ರಾಗಿ ಬೆಳೆದ, ಮನದಿ ಉಳಿದ ವಿಶೇಷ ವ್ಯಕ್ತಿ

'ಅರಸು'ತಿದೆ ಕೋಟಿ ಕೋಟಿ ಜೀವಗಳು ನಿಮ್ಮದೇ ದಾರಿಯ

'ಮಿಲನ'ವಾದಂತಿದೆ ಸದ್ಗುಣಗಳೆಲ್ಲ ನಿಮ್ಮುಸಿರಿನೊಳಗೆ

'ಬಿಂದಾಸ್' ಆಗಿ ಬದುಕುವವರಿಗೂ ದಾನ ಧರ್ಮ ಪರಿಶ್ರಮದ ಮಹತ್ವ ಸದ್ದಿಲ್ಲದೆ ತಿಳಿಸಿದಿರಿ

'ವಂಶಿ'ಯವಾಗಿ ಬಂದಿರಬಹುದು ಆ ಸಹಜತೆ, ಮಾನವೀಯತೆ

'ರಾಜ'ನಂತೆ ರಾಜ್ಯಭಾರ ಮಾಡಿದಿರಿ ಸಿನಿಲೋಕದಲ್ಲಿ

'ರಾಮ'ನಂತೆ ಇದ್ದಿರಿ ಮಡದಿಯ ಪ್ರೀತಿಸುವ ವಿಷಯದಲ್ಲಿ

'ಪೃಥ್ವಿ'ಯಲ್ಲಿ ನಿಮ್ಮಂಥವರು ಅಪರೂಪ...

'ಜಾಕಿ'ಯಾಗಿ ನೀವು ಏರಿದ ಸಿನಿಕುದುರೆ ಇಂದಿಗೂ ರೇಸ್ ನಲ್ಲಿ ಸಾಗುತ್ತಲೇ ಇದೆ.. ಅಭಿಮಾನದ ಹಾದಿಯಲ್ಲಿ, ಅಚ್ಚಳಿಯದ ರೀತಿಯಲ್ಲಿ..

'ಹುಡುಗರು' ನಿಮ್ಮ ಸಹೃದಯಿ ಕೆಲಸಕ್ಕೆ ತಲೆ ಬಾಗಿದರು

'ಪರಮಾತ್ಮ' ಕೂಡ ಮೆಚ್ಚುವಂಥ ಜೀವಾತ್ಮ ನೀವು

'ಅಣ್ಣಾ ಬಾಂಡ್' ಆಗಿ ಕುಣಿದು ಕುಪ್ಪಳಿಸಿದ, ನೀವು ಕಲಾ ರಸಿಕರ ಪಾಲಿಗೆ ಬೆಲೆ ಕಟ್ಟಲಾಗದ ಬ್ರಾಂಡ್ ನೀವು..

'ಯಾರೇ ಕೂಗಾಡಲಿ' ಅಥವಾ ಹೊಗಳಿಕೆ ನೂರಾಗಲಿ, ಎರಡು ಸಂದರ್ಭದಿ ನೀವೆಂದು ಬೀಗಲಿಲ್ಲ 

'ನಿನ್ನಿಂದಲೇ' ಸದ್ಗತಿ ಎಂದು ಗುರುರಾಯರಿಗೆ ತಲೆಬಾಗಿದ ರಾಯರ ಪರಮಭಕ್ತ

'ಪವರ್' ಹೌಸ್ ಇಂದ ಬಂದರೂ, ಅದನ್ನು ದುರುಪಯೋಗ ಪಡಿಸಿಕೊಳ್ಳದೆ ಮಾದರಿಯಾದವರು

'ಮೈತ್ರಿ' ಯಾದಂತಿತ್ತು ಸಹಜತೆ ಮತ್ತು ಸರಳತೆ, ಅದರಿಂದಲೇ ಹೆಚ್ಚಿತು ನಿಮ್ಮ ಘನತೆ..

'ರಣವಿಕ್ರಮ'ನಾಗಿ ನೀವು ಯಮನೆದುರು 
ಹೋರಾಡಲಿಲ್ಲ ಏಕೆ..?
ಒಳ್ಳೆತನವು ಹೀಗೆ ನಡುದಾರಿಯಲ್ಲಿ ಸಾವಿಗೆ ಶರಣಾಗಬೇಕೆ..?

'ಚಕ್ರವ್ಯೂಹ'ದಿ ನಿಮ್ಮನ್ನು ಸಿಲುಕಿಸಿದ ಆ ದೇವರು, 
ಮರಳಿ ಬರಲಿಲ್ಲ ನೀವು,‌ ಈಗ ನೋಡಿ, 
ಆ ನೋವಲ್ಲಿ ನರಳುತ್ತಿರುವುದು ನಿಮ್ಮ ಅಭಿಮಾನಿ ದೇವರು..

'ದೊಡ್ಮನೆ ಹುಡುಗ'ನ ದೊಡ್ಡತನ ಕೊಂಡಾಡುತಿದೆ ಜಗತ್ತು, ಈ ಅಭಿಮಾನದ ಪರಾಕಾಷ್ಠೆ ನೋಡಲು ನೀವಿರಬೇಕಿತ್ತು..

'ರಾಜಕುಮಾರ'ನಾಗಿ ಇರುವಿರಿ ಸದಾ ಕಾಲ ನಮ್ಮ ಅಭಿಮಾನದ ರಾಜ್ಯದಲ್ಲಿ, ನಿಮ್ಮ ನೆನಪು ಅಜರಾಮರ..

'ಅಂಜನಿಪುತ್ರ' ಹನುಮ ಸಂಜೀವಿನಿಯನ್ನು ತಂದು, 
ನಮಗಾಗಿ ನಿಮ್ಮನ್ನು ಉಳಿಸಬೇಕಿತ್ತು..

'ನಟಸಾರ್ವಭೌಮ'ನ ಕುಡಿಯಾಗಿ 
ವರನಟರ ಸಾಧನೆಯನ್ನು ಇನ್ನಷ್ಟು ಜೀವಂತವಾಗಿಸಿದಿರಿ, ಅಪ್ಪನ ಘನತೆಗೆ ನಾವೀನ್ಯತೆ ತುಂಬಿದಿರಿ..

'ಯುವರತ್ನ'ನಾಗಿ ಬೆಳ್ಳಿತೆರೆಯಲ್ಲಿ ಮಿಂಚಿದಿರಿ,
ಕರ್ನಾಟಕ ರತ್ನ ಪಡೆದು ಕರುನಾಡಿಗೆ ಖುಷಿಯ ಹಂಚಿದಿರಿ..

'ಜೇಮ್ಸ್' ಎಂಬ ಹೆಸರಲ್ಲಿ ಬರುತ್ತಿದ್ದೀರಿ ಬೆಳ್ಳಿಪರದೆಗೆ..
ಸಹಸ್ರ ಸಹಸ್ರ ಅಭಿಮಾನಿಯ ಎದೆಯಲ್ಲಿ ಈಗ ನಿಮ್ಮದೇ ಅಭಿಮಾನದ ಫ್ರೇಮ್ಸ್ ಇದೆ.. ಮತ್ತದು ಎಂದಿಗೂ ಇರುತ್ತದೆ..‌..

ತುಂಬು ಅಭಿಮಾನದಿಂದ ಬರೆದ ಸಾಲುಗಳಿವು

ರಚನೆ - ಯಲ್ಲಪ್ಪ ನಂದಿ. 17th March 2022

Tuesday, 1 March 2022

ಮಹಾಶಿವರಾತ್ರಿಯ ಶುಭಾಶಯಗಳು

ಸತಿಯ ಸುಟ್ಟ ದೇಹವನ್ನು ಹೊತ್ತು ಹುಚ್ಚನಂತೆ ಅಲೆದಾಡಿದ ಪ್ರೇಮಯೋಗಿ. ಸಮಸ್ತ ಗಣದೊಂದಿಗೆ ಕೈಲಾಸದಿಂದ ವರಯಾತ್ರೆ ಹೊರಟು ಮದುವೆಯೆಂಬ ಅಮೋಘ ಚಿತ್ರಣ ಕಟ್ಟಿಕೊಟ್ಟ ವರಯೋಗಿ. ಅರ್ಧನಾರೀಶ್ವರನಾಗಿ ಲಿಂಗಸಮಾನತೆ ಮೆರೆದ ಪುರುಷಯೋಗಿ. ಸುಬ್ರಹ್ಮಣ್ಯ, ಗಣೇಶ, ಅಶೋಕ ಸುಂದರಿಯನ್ನೊಳಗೊಂಡ ಸುಸಂಸಾರಯೋಗಿ. ಗಾನ ಹೇಳಿಕೊಟ್ಟ ನಾದಯೋಗಿ. ಜ್ಞಾನ ಕರುಣಿಸಿದ ವೇದಯೋಗಿ. ನಟರಾಜನಾದ ನಾಟ್ಯಯೋಗಿ. ಲೋಕದ ಹಿತಕಾಗಿ ವಿಷವನು ಕುಡಿದ ಲೋಕೋಪಯೋಗಿ. ಕಾಳಿಯ ಕೆಂಡದಂಥಾ ಕೋಪವನ್ನೂ ತನ್ನೆದೆಯ ಮೇಲಿನ ಒಲವಾಗಿಸಿದ ಧ್ಯಾನಯೋಗಿ. ಬದುಕು ಬೂದಿಯೆಂದು ಸಾರಿದ ಸ್ಮಶಾನಯೋಗಿ. ಸುರಾಸುರ ಭೇದ ಮಾಡದ ಕರುಣಾಯೋಗಿ. ಅಣು-ಅಣುವಿನ ಅಂಕುರನಾಥ ಈ ಆದಿಯೋಗಿ! 
ಮಹಾಶಿವರಾತ್ರಿಯ ಶುಭಾಶಯಗಳು.

Tuesday, 11 January 2022

ಭಗವದ್ಗೀತೆಯ ಕಿರು ಪರಿಚಯ.

* ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು.?

 ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ.

 

* ಯಾವಾಗ ಬೋಧಿಸಿದ.?

ಉತ್ತರ : ಇಂದಿನಿಂದ ಸುಮಾರು ಸಾವಿರ ವರ್ಷಗಳ ಹಿಂದೆ.

 

* ಯಾವ ದಿನ ಬೋಧಿಸಿದ.?

ಉತ್ತರ : ರವಿವಾರ.

 

* ಯಾವ ತಿಥಿಯಲ್ಲಿ.?

ಉತ್ತರ : ಏಕಾದಶಿಯಂದು.

 

* ಎಲ್ಲಿ ಬೋಧಿಸಿದ..?

ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ.

 

* ಎಷ್ಟು ಸಮಯ ಬೋಧಿಸಿದ.?

ಉತ್ತರ : 45 ನಿಮಿಷ.

 

 

 

* ಅರ್ಜುನನಿಗೇಕೆ ಗೀತೆಯನ್ನು ಬೋಧಿಸಿದ.?

ಉತ್ತರ : ಕ್ಷತ್ರಿಯನಿಗೆ

 

ಕರ್ತವ್ಯವಾದದ್ದು ಯುದ್ಧ...

ತನ್ನ ಕರ್ತವ್ಯದಿಂದ ಅರ್ಜುನ

ವಿಮುಖನಾಗಲು ಬಯಸುತ್ತಾನೆ...

ಯುದ್ಧಮಾಡದಿರಲು ನಿಶ್ಚಯಿಸುತ್ತಾನೆ...

ಆತನಿಗೆ ತನ್ನ ಕರ್ತವ್ಯಗಳನ್ನು ಮನದಟ್ಟು

ಮಾಡಲು ಹಾಗೂ ಭವಿಷ್ಯದ

ಮಾನವಸಂತತಿಗೆ ಧರ್ಮಜ್ಞಾನವನ್ನು

ನೀಡಲು ಕೃಷ್ಣ ಗೀತೆಯನ್ನು ಬೋಧಿಸಿದ.

 

* ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ.?

ಉತ್ತರ : ಹದಿನೆಂಟು.

 

* ಎಷ್ಟು ಶ್ಲೋಕಗಳಿವೆ..?

ಉತ್ತರ : 700 ಶ್ಲೋಕಗಳು.

 

* ಗೀತೆಯಲ್ಲಿರುವ ವಿಷಯಗಳಾವವು.?

ಉತ್ತರ : ಜ್ಞಾನಭಕ್ತಿಕರ್ಮಯೋಗ

ಮಾರ್ಗಗಳ ವಿಸ್ತೃತವಾದ ವ್ಯಾಖ್ಯಾನ. ಮಾರ್ಗಗಳಲ್ಲಿ ನಡೆಯುವವರು ಖಂಡಿತವಾಗಲೂ ಪರಮಸ್ಥಾನವನ್ನು ಪಡೆಯುತ್ತಾರೆಂದು ಹೇಳಲಾಗಿದೆ.

 

* ಅರ್ಜುನನನ್ನು ಬಿಟ್ಟರೆ ಗೀತೆಯನ್ನು ಮತ್ತ್ಯಾರು ಕೇಳಿದ್ದಾರೆ.?

ಉತ್ತರ : ಧೃತರಾಷ್ಟ್ರ ಹಾಗೂ ಸಂಜಯ.

 

 

 

* ಅರ್ಜುನನಿಗಿಂತಲೂ ಮೊದಲು ಗೀತೆಯ ಪವಿತ್ರ ಜ್ಞಾನ ಯಾರಿಗೆ ತಿಳಿದಿತ್ತು.?

ಉತ್ತರ : ಭಗವಾನ್ ಸೂರ್ಯದೇವನಿಗೆ.

 

* ಭಗವದ್ಗೀತೆಯನ್ನು ಯಾವ ಧರ್ಮಗ್ರಂಥದಲ್ಲಿ ಸೇರಿಸಲಾಗಿದೆ.?

ಉತ್ತರ : ಉಪನಿಷತ್ತಿನಲ್ಲಿ.

 

* ಗೀತೆ ಯಾವ ಗ್ರಂಥದ ಭಾಗವಾಗಿದೆ.?

ಉತ್ತರ : ಮಹಾಭಾರತದ ಭೀಷ್ಮಪರ್ವದ ಒಂದು ಭಾಗವಾಗಿದೆ.

 

* ಭಗವದ್ಗೀತೆಯ ಇನ್ನೊಂದು ಹೆಸರು.?

ಉತ್ತರ : ಗೀತೋಪನಿಷತ್.

 

* ಗೀತೆಯ ಸಾರವೇನು.?

ಉತ್ತರ : ಕರ್ಮಫಲಗಳನ್ನು ಬಿಟ್ಟು , ಭಗವಂತನಲ್ಲಿ ಶರಣಾಗತಿಯನ್ನು ಹೊಂದುವುದು.

 

* ಭಗವದ್ಗೀತೆಯಲ್ಲಿ ಯಾರು ಎಷ್ಟು ಶ್ಲೋಕಗಳನ್ನು ಹೇಳಿದ್ದಾರೆ?

ಉತ್ತರ

ಶ್ರೀಕೃಷ್ಣ – 574

ಅರ್ಜುನ – 85

ಧೃತರಾಷ್ಟ್ರ – 01

ಸಂಜಯ – 40