Saturday, 26 August 2023

Domestic, International Air ticketing, and Reservation. ದೇಶೀಯ, ಅಂತರಾಷ್ಟ್ರೀಯ ಏರ್ ಟಿಕೆಟಿಂಗ್ ಮತ್ತು ರಿಸರ್ವೇಶನ್.

Domestic, International Air ticketing, and Reservation.

I the Mr Yallappa Nandi, I have completed Air ticketing and reservation (GDS) course, UK 5th level qualification at Institute of Commercial Management UK Bournemouth England, and I have 10 years experience in Civil Aviation Service in India, Extensive working knowledge in Airlines industry, I have issued more than 10 lakh Air tickets for Indian travelers traveling across to the worldwide, I have received worldwide operating Airline's ticketing Authority and membership.

ದೇಶೀಯ, ಅಂತರಾಷ್ಟ್ರೀಯ ಏರ್ ಟಿಕೆಟಿಂಗ್ ಮತ್ತು ರಿಸರ್ವೇಶನ್.

ನಾನು ಶ್ರೀ ಯಲ್ಲಪ್ಪ ನಂದಿ, ಇನ್ಸ್ಟಿಟ್ಯೂಟ್ ಆಫ್ ಕಮರ್ಷಿಯಲ್ ಮ್ಯಾನೇಜ್ಮೆಂಟ್ ಯುಕೆ ಬೋರ್ನ್ಮೌತ್ ಇಂಗ್ಲೆಂಡ್ನಲ್ಲಿ ಏರ್ ಟಿಕೆಟಿಂಗ್ ಮತ್ತು ರಿಸರ್ವೇಶನ್ (ಜಿಡಿಎಸ್) ಕೋರ್ಸ್, ಯುಕೆ 5ನೇ ಹಂತದ ಅರ್ಹತೆಯನ್ನು ಪೂರ್ಣಗೊಳಿಸಿದ್ದೇನೆ ಮತ್ತು ಭಾರತದಲ್ಲಿ ಸಿವಿಲ್ ಏವಿಯೇಷನ್ ಸೇವೆಯಲ್ಲಿ 10 ವರ್ಷಗಳ ಅನುಭವವನ್ನು ಹೊಂದಿದ್ದೇನೆ, ನಾನು ೧೦ ಲಕ್ಷಕ್ಕೂ ಅಧಿಕ ವಿಮಾನ ಟಿಕೆಟ್ಗಳನ್ನು ವಿಶ್ವದಾದ್ಯಂತ ಪ್ರಯಾಣಿಸಲು ಭಾರತೀಯ ಪ್ರಯಾಣಿಕರಿಗೆ ನೀಡಿದ್ದೇನೆ, ವಿಮಾನ ಸೇವೆಯಲ್ಲಿ ಉತ್ತಮವಾದ ಜ್ಞಾನವನ್ನು ಹೊಂದಿದ್ದೇನೆ, ವಿಶ್ವದ್ಯಾಂತ ಸಂಚರಿಸುವ ಎಲ್ಲ ವಿಮಾನ ಟಿಕೆಟಿಂಗ್ ಮಾಡುವ ಅಥಾರಿಟಿ ಪಡಿದಿದ್ದೇನೆ ಮತ್ತು ವಿಶ್ವದ್ಯಾಂತ ಹಲವಾರು ವಿಮಾನ ಸಂಸ್ಥೆಗಳ ಮೆಂಬರ್ ಶಿಪ್ ಪಡಿದಿದ್ದೇನೆ.

Tuesday, 14 March 2023

ಪುಲಿಕೇಶಿ ಸೈನ್ಯವನ್ನು "ಕರ್ಣಾಟ ಬಲಂ ಅಜೇಯಂ" ಎಂದು ಏಕೆ ಕರೆಯುತ್ತಿದ್ದರು?

​ಸಣ್ಣ ಸಣ್ಣ ಸಾಮ್ರಾಜ್ಯ ಕಟ್ಟಿರೋರೆಲ್ಲ ಸಾಮ್ರಾಟರಾದ್ರೆ ಆ ಎಲ್ಲ ಸಾಮ್ರಾಟರಿಗೆ ಅಪ್ಪ ಕಣ್ರೋ ನಮ್ಮ ಇಮ್ಮಡಿ ಪುಲಿಕೇಶಿ. 


ಆರನೇ ಶತಮಾನದಲ್ಲಿ ದಕ್ಷಿಣದಲ್ಲಿ ಪುಲಿಕೇಶಿಯು ಸಮರ್ಥ ರಾಜನಾಗಿರುತ್ತಾನೆ ಹಾಗೆಯೇ ಅವನ ಕಾಲಕ್ಕೆ ಉತ್ತರ ಭಾರತದ ಪ್ರಬಲ ದೊರೆಯಾಗಿದ್ದವನು ವರ್ಧನ ವಂಶದ ಹರ್ಷವರ್ಧನ. ಇಬ್ಬರು ರಾಜರುಗಳ ಸಾಮ್ರಾಜ್ಯಗಳ ಗಡಿ ನರ್ಮದ ನದಿ. ನರ್ಮದ ನದಿಯ ಮೇಲಿನ ಪ್ರದೇಶ ಹರ್ಷವರ್ಧನನ ಸಾಮ್ರಾಜ್ಯದ ಭಾಗವಾಗಿದ್ದಾರೆ, ನರ್ಮದ ನದಿಯ ಕೆಳಗಿನ ಪ್ರದೇಶ ಪುಲಿಕೇಶಿ ರಾಜನ ಸಾಮ್ರಾಜ್ಯದ ಭಾಗವಾಗಿರುತ್ತದೆ. ಒಮ್ಮೆ ದಕ್ಷಿಣದಲ್ಲಿ ದಿಗ್ವಿಜಯ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಹರ್ಷ ಮಹಾರಾಜ ತನ್ನ ಸೈನ್ಯ ಸಮೇತ ಪುಲಿಕೇಶಿ ಸಾಮ್ರಾಜ್ಯದ ಮೇಲೆ ದಾಳಿ ಮಾಡುತ್ತಾನೆ. ೬೧೮-೬೧೯ರಲ್ಲಿ, ನರ್ಮದ ನದಿಯ ತಟದಲ್ಲಿ ನಡೆದ ಈ ಕದನದಲ್ಲಿ ಹರ್ಷವರ್ಧನನ ಸೈನ್ಯ ಪುಲಿಕೇಶಿಯ ಸೈನ್ಯದ ಮುಂದೆ ಸೋತು ಸುಣ್ಣವಾಗುತ್ತದೆ. ಸುಮಾರು ಅರವತ್ತು ಸಾವಿರ ಆನೆಗಳಿಂದ ಕೂಡಿದ ಪುಲಿಕೇಶಿಯ ಗಜಪಡೆ ಹಾಗೂ ಸೈನ್ಯವನ್ನ ಆ ಕಾಲಕ್ಕೆ ಯಾರಿಂದಲೂ ಸೋಲಿಸಲು ಅಸಾಧ್ಯವಾದ ಕಾರಣ ಆತನ ಸೈನ್ಯವನ್ನ "ಕರ್ಣಾಟ ಬಲಂ ಅಜೇಯಂ" ಎಂದು ವರ್ಣಿಸಲ್ಪಟ್ಟಿದೆ. ಯುದ್ಧದಲ್ಲಿ ಜಯಿಸಿದ ಪುಲಿಕೇಶಿ ಮಹರಾಜ ಪರಮೇಶ್ವರ ಎಂಬ ಬಿರುದನ್ನೂ ಪಡೆಯುತ್ತಾನೆ.