Tuesday, 11 January 2022

ಭಗವದ್ಗೀತೆಯ ಕಿರು ಪರಿಚಯ.

* ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು.?

 ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ.

 

* ಯಾವಾಗ ಬೋಧಿಸಿದ.?

ಉತ್ತರ : ಇಂದಿನಿಂದ ಸುಮಾರು ಸಾವಿರ ವರ್ಷಗಳ ಹಿಂದೆ.

 

* ಯಾವ ದಿನ ಬೋಧಿಸಿದ.?

ಉತ್ತರ : ರವಿವಾರ.

 

* ಯಾವ ತಿಥಿಯಲ್ಲಿ.?

ಉತ್ತರ : ಏಕಾದಶಿಯಂದು.

 

* ಎಲ್ಲಿ ಬೋಧಿಸಿದ..?

ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ.

 

* ಎಷ್ಟು ಸಮಯ ಬೋಧಿಸಿದ.?

ಉತ್ತರ : 45 ನಿಮಿಷ.

 

 

 

* ಅರ್ಜುನನಿಗೇಕೆ ಗೀತೆಯನ್ನು ಬೋಧಿಸಿದ.?

ಉತ್ತರ : ಕ್ಷತ್ರಿಯನಿಗೆ

 

ಕರ್ತವ್ಯವಾದದ್ದು ಯುದ್ಧ...

ತನ್ನ ಕರ್ತವ್ಯದಿಂದ ಅರ್ಜುನ

ವಿಮುಖನಾಗಲು ಬಯಸುತ್ತಾನೆ...

ಯುದ್ಧಮಾಡದಿರಲು ನಿಶ್ಚಯಿಸುತ್ತಾನೆ...

ಆತನಿಗೆ ತನ್ನ ಕರ್ತವ್ಯಗಳನ್ನು ಮನದಟ್ಟು

ಮಾಡಲು ಹಾಗೂ ಭವಿಷ್ಯದ

ಮಾನವಸಂತತಿಗೆ ಧರ್ಮಜ್ಞಾನವನ್ನು

ನೀಡಲು ಕೃಷ್ಣ ಗೀತೆಯನ್ನು ಬೋಧಿಸಿದ.

 

* ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ.?

ಉತ್ತರ : ಹದಿನೆಂಟು.

 

* ಎಷ್ಟು ಶ್ಲೋಕಗಳಿವೆ..?

ಉತ್ತರ : 700 ಶ್ಲೋಕಗಳು.

 

* ಗೀತೆಯಲ್ಲಿರುವ ವಿಷಯಗಳಾವವು.?

ಉತ್ತರ : ಜ್ಞಾನಭಕ್ತಿಕರ್ಮಯೋಗ

ಮಾರ್ಗಗಳ ವಿಸ್ತೃತವಾದ ವ್ಯಾಖ್ಯಾನ. ಮಾರ್ಗಗಳಲ್ಲಿ ನಡೆಯುವವರು ಖಂಡಿತವಾಗಲೂ ಪರಮಸ್ಥಾನವನ್ನು ಪಡೆಯುತ್ತಾರೆಂದು ಹೇಳಲಾಗಿದೆ.

 

* ಅರ್ಜುನನನ್ನು ಬಿಟ್ಟರೆ ಗೀತೆಯನ್ನು ಮತ್ತ್ಯಾರು ಕೇಳಿದ್ದಾರೆ.?

ಉತ್ತರ : ಧೃತರಾಷ್ಟ್ರ ಹಾಗೂ ಸಂಜಯ.

 

 

 

* ಅರ್ಜುನನಿಗಿಂತಲೂ ಮೊದಲು ಗೀತೆಯ ಪವಿತ್ರ ಜ್ಞಾನ ಯಾರಿಗೆ ತಿಳಿದಿತ್ತು.?

ಉತ್ತರ : ಭಗವಾನ್ ಸೂರ್ಯದೇವನಿಗೆ.

 

* ಭಗವದ್ಗೀತೆಯನ್ನು ಯಾವ ಧರ್ಮಗ್ರಂಥದಲ್ಲಿ ಸೇರಿಸಲಾಗಿದೆ.?

ಉತ್ತರ : ಉಪನಿಷತ್ತಿನಲ್ಲಿ.

 

* ಗೀತೆ ಯಾವ ಗ್ರಂಥದ ಭಾಗವಾಗಿದೆ.?

ಉತ್ತರ : ಮಹಾಭಾರತದ ಭೀಷ್ಮಪರ್ವದ ಒಂದು ಭಾಗವಾಗಿದೆ.

 

* ಭಗವದ್ಗೀತೆಯ ಇನ್ನೊಂದು ಹೆಸರು.?

ಉತ್ತರ : ಗೀತೋಪನಿಷತ್.

 

* ಗೀತೆಯ ಸಾರವೇನು.?

ಉತ್ತರ : ಕರ್ಮಫಲಗಳನ್ನು ಬಿಟ್ಟು , ಭಗವಂತನಲ್ಲಿ ಶರಣಾಗತಿಯನ್ನು ಹೊಂದುವುದು.

 

* ಭಗವದ್ಗೀತೆಯಲ್ಲಿ ಯಾರು ಎಷ್ಟು ಶ್ಲೋಕಗಳನ್ನು ಹೇಳಿದ್ದಾರೆ?

ಉತ್ತರ

ಶ್ರೀಕೃಷ್ಣ – 574

ಅರ್ಜುನ – 85

ಧೃತರಾಷ್ಟ್ರ – 01

ಸಂಜಯ – 40