Tuesday, 28 May 2019

ವಿಶ್ವಾಸ ದೇವರಂತೆ ಬದುಕಿಗಿಂತ ಬಲು ದೊಡ್ಡದು.

ಒಮ್ಮೆ ಶ್ರೀಕೃಷ್ಣ ಪಾಂಡವರನ್ನು ನೋಡಲು ಬಂದಿದ್ದ...
ಪಾಂಡವರು ವನವಾಸದಲ್ಲಿದ್ದರು.
ಮಧ್ಯಾಹ್ನ ಭೋಜನದ ಸಮಯವಾದರೂ
ಧರ್ಮರಾಜ ಕುಟೀರಕ್ಕೆ ಬಂದಿರಲಿಲ್ಲ. ಎಲ್ಲಿ
ಹುಡುಕಿದರೂ ಧರ್ಮರಾಜ ಸಿಗಲಿಲ್ಲ. ಯಾರೋ ಹೇಳಿದರು..
"ಇಲ್ಲೇ ಪಕ್ಕದಲ್ಲಿ
ಒಂದು ಅಜ್ಜಿಯ ಗುಡಿಸಲು ಇದೆ. ಅಲ್ಲಿ ಧರ್ಮರಾಜ ಇದ್ದಾನೆ..."
ಪಾಂಡವರು
ಶ್ರೀಕೃಷ್ಣನ ಜೊತೆಗೂಡಿ ಅಜ್ಜಿಯ ಗುಡಿಸಲಿಗೆ ಬಂದರು... ಎಲ್ಲರಿಗೂ ಆಶ್ಚರ್ಯ.. ! ಧರ್ಮರಾಜ
ಅಜ್ಜಿಗಾಗಿ ಕಟ್ಟಿಗೆ ಹೊರೆಯನ್ನು ಹೊತ್ತುಕೊಂಡು ಬಂದು
ಗುಡಿಸಲ ಪಕ್ಕದಲ್ಲಿ ಸಂಗ್ರಹಿಸಿಡುತ್ತಿದ್ದಾನೆ !
ಕೃಷ್ಣ ಕುತೂಹಲದಿಂದ ಕೇಳಿದ..
"ಧರ್ಮಜಾ...
ಇದೇನಿದು ಕಟ್ಟಿಗೆ ಹೊರೆಯನ್ನು ಹೊರುತ್ತಿದ್ದೀಯಾ ?..."
ಧರ್ಮರಾಜ
ಬೆವರು ಒರೆಸಿಕೊಳ್ಳುತ್ತ ಹೇಳಿದ...
"ಮಾಧವಾ..
ಈ ಅಜ್ಜಿ ಇಲ್ಲಿ ಒಬ್ಬಳೇ ಇರುತ್ತಾಳೆ. ಇಂದು
ಬೆಳಿಗ್ಗೆ ಕಟ್ಟಿಗೆ ಹೊರೆಯನ್ನು ತನ್ನ ತಲೆಯ ಮೇಲೆ
ಇಟ್ಟುಕೊಳ್ಳಲಾಗದೆ ಕಷ್ಟಪಡುತ್ತಿದ್ದಳು. ನನಗೆ ನೋಡಲಾಗಲಿಲ್ಲ.ಸಹಾಯ ಮಾಡುತ್ತಿದ್ದೇನೆ..."
ಕೃಷ್ಣ ಮತ್ತೆ ಕೇಳಿದ."ಧರ್ಮಜಾ...
ಕಟ್ಟಿಗೆ ಹೊರೆಯನ್ನು
ಅಜ್ಜಿಯ ತಲೆಯ ಮೇಲೆ ಇಟ್ಟಿದರೆ ನಿನ್ನ ಕರ್ತವ್ಯ ಮುಗಿಯುತ್ತಿತ್ತು. ಅಥವಾ ಆ ಹೊರೆಯನ್ನು ಅವಳ ಗುಡಿಸಲಿಗೆ ತಂದುಕೊಟ್ಟರೆ ಸಾಕಾಗಿತ್ತು.ದಿನಾಪೂರ್ತಿ ಕಟ್ಟಿಗೆ ಹೊರೆಯನ್ನು ಹೊರುವ ಅಗತ್ಯವೇನಿತ್ತು ಧರ್ಮಜಾ ?.."..
ಧರ್ಮರಾಜ
ಮತ್ತೊಮ್ಮೆ ಬೆವರನ್ನು ಒರೆಸಿಕೊಂಡ..
"ಕೃಷ್ಣಾ...
ಲೋಕನೀತಿಯಲ್ಲಿ ನೀನು ಹೇಳುತ್ತಿರುವದು ಸರಿ. ವಿಷಯ ಅದಲ್ಲ...ಇಲ್ಲಿ ಅಜ್ಜಿಗೆ
ಸಹಾಯ ಮಾಡುವದರ ಹಿಂದೆ ನನ್ನ ಸ್ವಾರ್ಥವೂ ಇದೆ..." ...
ಪಾಂಡವರಿಗೆಲ್ಲ ಆಶ್ಚರ್ಯವಾಯಿತು...
"ಮಾಧವಾ, ಯಾರಾದರೂ
ಇಂಥಹ
ವಯಸ್ಸಾದವರಿಗೆ
ಸಹಾಯದ ಅವಶ್ಯಕತೆ ನಮಗೆ ಕಾಣಿಸಿದಲ್ಲಿ ಸಹಾಯ ಮಾಡಿಬಿಡಬೇಕು. ನಮ್ಮಿಂದ
ದೂರದಲ್ಲಿರುವ
ನಮ್ಮ ಹೆತ್ತವರಿಗೆ ಅಗತ್ಯವಿರುವಾಗ
ನನ್ನಂತೆ
ಅಲ್ಲೂ ಸಹ ಯಾರಾದರೂ ಸಹಾಯ ಮಾಡಲು ಬರುತ್ತಾರೆ... ಇದು
ನನ್ನ ನಂಬಿಕೆ... ಅದಮ್ಯ ವಿಶ್ವಾಸ....! ನನ್ನ
ತಾಯಿ ಕುಂತಿದೇವಿ ದೂರದ ಹಸ್ತಿನಾವತಿಪುರದಲ್ಲಿದ್ದಾಳೆ.
ಹೆತ್ತವಳಿಗಂತೂ ಸಹಾಯ ಮಾಡಲಾಗುವದಿಲ್ಲ... ಈ ಅಜ್ಜಿಗೆ
ಸಹಾಯ ಮಾಡುವದರಲ್ಲಿ
ನನ್ನ ಸ್ವಾರ್ಥವಿದೆ ಕೃಷ್ಣಾ...ವೃದ್ಯಾಪ್ಯದ
ಅಸಹಾಯಕದಲ್ಲಿರುವ
ನನ್ನಮ್ಮನಿಗೆ ನನ್ನ ಅಗತ್ಯ ಎಷ್ಟಿದೆಯೋ ಗೊತಿಲ್ಲ....
ಈ ಅಜ್ಜಿಯಲ್ಲಿ
ನನ್ನಮ್ಮನನ್ನು ಕಾಣುತ್ತಿದ್ದೆನೆ ಕೃಷ್ಣಾ...." ....
ಶ್ರೀಕೃಷ್ಣ ಮೂಕನಾಗಿದ್ದ...
ಉಳಿದ
ಪಾಂಡವರ ಕಣ್ಣಲ್ಲಿ ನೀರು ಜಿನುಗಿತ್ತು...
ಶ್ರೀಕೃಷ್ಣ
ಧರ್ಮರಾಜನನ್ನು
ಪ್ರೀತಿಯಿಂದ ಆಲಂಗಿಸಿಕೊಂಡ...
ಬದುಕು...ನೌಕರಿ...ಹೋರಾಟ..ಮಕ್ಕಳು.. ಸಂಸಾರ..
ವ್ಯವಹಾರಗಳ ಜಂಜಡದಲ್ಲಿ
ನಮ್ಮ ಹೆತ್ತವರ ಜೊತೆಯಾಗಿ ಇರಲು ಸಾಧ್ಯವಾಗುವದಿಲ್ಲ...
ನಮ್ಮ
ಅಕ್ಕಪಕ್ಕದಲ್ಲಿ..
ರಸ್ತೆಯಲ್ಲಿ ಹೋಗುವಾಗ ...
ಯಾರಾದರೂ
ವೃದ್ಧರು ...
ಅಸಹಾಯಕರು ಕಂಡಲ್ಲಿ..
ಅವರಿಗೆ ಸಹಾಯದ ಅವಶ್ಯಕತೆ ಇದ್ದಲ್ಲಿ
ಖಂಡಿತ ಹೋಗಿ ಮಾಡಬೇಕು...
ಅಗತ್ಯವಿರುವವರಿಗೆ
ಸಹಾಯ ಮಾಡುವದು ಪುಣ್ಯದ ಕೆಲಸ..
ಸಹಾಯ ಮಾಡುವ ಸಂದರ್ಭ ಎಲ್ಲರಿಗೂ ಸಿಗುವದಿಲ್ಲ...
ಭಾಗ್ಯವಂತರಿಗೆ ಮಾತ್ರ ಸಹಾಯ ಮಾಡುವ ಸಂದರ್ಭ ಸಿಗುತ್ತದೆ..
ಹೆತ್ತವರನ್ನು
ನೆನಪಿಸಿಕೊಂಡು ಅಂಥವರಿಗೆ ಸಹಾಯ ಮಾಡಬೇಕು...
ದೂರದಲ್ಲಿರುವ
ನಮ್ಮ ಹೆತ್ತವರಿಗೆ ಯಾರೋ ಪುಣ್ಯಾತ್ಮರು ಸಹಾಯ ಮಾಡಿರುತ್ತಾರೆ...
ನಂಬಿಕೆ
ವಿಶ್ವಾಸ ದೇವರಂತೆ ಬದುಕಿಗಿಂತ ಬಲು ದೊಡ್ಡದು...

ಯುವರಾಜ ನಂದಿ 

Wednesday, 8 May 2019



ಕಲ್ಪನಾ ಲೋಕ

ಕಲ್ಪನಾ ಲೋಕದಿಂದ ಹೊರ ಬಂದೆ ವಾಸ್ತವವನ್ನು ಒಪ್ಪಿಕೊಂಡೆ
ಕೆಲವೊಮ್ಮೆ ನಾವು ಇಷ್ಟ ಪಟ್ಟ ಎಲ್ಲ ವಸ್ತುಗಳು ನಮ್ಮದಾಗುವುದಿಲ್ಲ
ಕೆಲವೊಮ್ಮೆ ನಾವು ಕಂಡಂತೆ ಎಷ್ಟೋ ಕನಸುಗಳೆಲ್ಲ ನಾವು ಊಹಿಸಿದಂತೆ ನನಸಾಗುವುದಿಲ್ಲ
ಕೆಲವೊಮ್ಮೆ ನಮ್ಮಲ್ಲಿ ಎಷ್ಟೇ ನೋವಿದ್ದರೂ ಸಹ ಅದನ್ನು ಬದಿಗಿಟ್ಟು ಸಹಜವಾಗಿ ವರ್ತಿಸಬೇಕಾಗುತ್ತೆ
ಅದು ಕೂಡ ಮತ್ತೊಬ್ಬರ ಮುಖದಲ್ಲಿ ನಗುವನ್ನು ನೋಡಲು
ಕೆಲವೊಮ್ಮೆ ಗೆಲ್ಲುತ್ತೇವೆ ಕೆಲವೊಮ್ಮೆ ಕಲಿಯುತ್ತೇವೆ
ಆದರೆ ಒಂದು ವಿಷಯ ನೆನಪಿನಲ್ಲಿಟ್ಟಕೊಂಡಿದೀನಿ ವಾಸ್ತವವನ್ನು ಒಪ್ಪಿಕೊಂಡು ನಮ್ಮವರು ಅನಕೊಂಡವರೆಲ್ಲ ಕೊನೆವರೆಗೂ ನಮ್ಮ ಜೊತೆ ಇರುವದಿಲ್ಲ ಅನ್ನೋ ಅರ್ಥ ನಿಜವಾಯಿತು
ಕಲ್ಪನಾ ಲೋಕದಿಂದ ಹೊರ ಬಂದೆ ವಾಸ್ತವವನ್ನು ಒಪ್ಪಿಕೊಂಡೆ.

ಯುವರಾಜ ನಂದಿ